ಬೇಲಿ

ಈ ಹಸಿರು ಹುಲ್ಲು,
ಈ ಹೂವು-ಹಣ್ಣು
ಈ ಬಣ್ಣದ ಹಕ್ಕಿಗಳು
ಈ ಗಂಧಗಾಳಿ
ಈ ಗೂಢ ಶಾಂತಿ
ಈ ತಂಪು ತೋಟದಲ್ಲಿ
ಶ್ವೇತಾಂಬರಿಯ ಹಂಸಗಮನ
ಆಚೀಚೆ ಹಾಲ
ಹಸುಳೆಗಳ ಬೆಳದಿಂಗಳ ನಗು

ಸೂರ್ಯನಿಲ್ಲಿ ಚಂದಿರ
ಚಂದಿರನೋ ಹಾಲೈಸ್ಕ್ರೀಂ

ಇವರೆಲ್ಲ ಬೇಲಿ ಬಿಗಿದಿದ್ದಾರೆ
ಸುತ್ತಲೂ ಎಲುಬಿನ ತಡಿಕೆಗಳಿಂದ
ಗಂಟು ಗಂಟಿನಲ್ಲಿ
ಜಗ್ಗಿ ಹಗ್ಗ ಕಟ್ಟಿದ್ದಾರೆ

ಮೂಡಲ ಮುಂಬಾಗಿಲು
ಪಡುವಲ ಹಿಂಬಾಗಿಲು
ದಿನ ಮೊದಲಿಗೆ ನವಜೀವನ
ರಾತ್ರಿಯಲ್ಲಿ ಮರಣ ಧ್ಯಾನ
ಬಾಗಿಲ ಕಾಯಲಿಕ್ಕಿದೆ
ಬರೀ ಒಂದು ಹೊಟ್ಟೆ

ಹೆಜ್ಜೆ ಹೆಜ್ಜೆಗೂ ಹಲ್ಲು,
ನಾಲಗೆ-ಜೊಲ್ಲು
ಈ ನಡುವಿನ ತೋಟ
ಬದುಕಿ ಉಳಿದಿರುವುದೊಂದು ಗುಲ್ಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗ್ರಂಥಾಲಯಗಳೋ ಗತಾಲಯಗಳೋ
Next post ಲಿಂಗಮ್ಮನ ವಚನಗಳು – ೬೮

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys